ವರದಕ್ಷಿಣೆಗಾಗಿ ಗರ್ಭಿಣಿ ಹೆಂಡತಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ

ಬುದ್ದಿ ಕಲಿಯದ ಪಾಪಿ ಪತಿ

ಹಾಸನ: ವರದಕ್ಷಿಣೆ ಕಿರುಕುಳ ನೀಡಿ ಹೆಂಡತಿಯನ್ನು ಕೊಲೆಗೈದ ಪಾಪಿ ಪತಿ ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕು ನೊರನಕ್ಕಿ ಗ್ರಾಮದಲ್ಲಿ ನಡೆದದೆ. 

ನಯನ (24) ಮೃತ ದುರ್ದೈವಿ. ಪತಿ ಅಯ್ಯಪ್ಪ (31) ಪತ್ನಿಯನ್ನು ಕೊಲೆಗೈದು ಪ್ರಾಯಶ್ಚಿತಕ್ಕಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜಿಲ್ಲಾಸ್ಪತ್ರೆ ಸೇರಿದ್ದಾನೆ. 

ಮೂರು ವರ್ಷದ ಹಿಂದೆ ಮದುವೆಯಾಗಿದ್ದ ನಯನ-ಅಯ್ಯಪ್ಪ ದಂಪತಿಗೆ ಒಂದು ಗಂಡು ಮಗು ಇದ್ದು, ನಯನ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರು.

ತವರಿನಿಂದ ವರದಕ್ಷಿಣೆ ತರುವಂತೆ ಅಯ್ಯಪ್ಪ ಪದೆ ಪದೇ ಜಗಳ ಮಾಡುತ್ತಿದ್ದ . ಇದೇ ವಿಚಾರವಾಗಿ ಎರಡು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೂ ಬುದ್ದಿ ಕಲಿಯದ ಆತ ಕೋಪದಲ್ಲಿ ಅಚಾತುರ್ಯ ಎಸಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Post a Comment

0 Comments