ಗೆಳೆಯನ ಕೊಂದು ಪ್ರಪಾತಕ್ಕೆ ಎಸೆದ ಆಪ್ತ ಸ್ನೇಹಿತರು
ಹಾಸನ: ಕಳ್ಳತನದ ವಿಚಾರವನ್ನು ಬಾಯ್ಬಿಡುತ್ತಾನೆ ಎಂದು ಆಪ್ತ ಸ್ನೇಹಿತನ ಕೊಲೆಗೈದು ಶಿರಾಡಿ ಘಾಟ್ ನ ಪ್ರಪಾತಕ್ಕೆ ಎಸೆದಿರುವ ಘಟನೆ ನಡೆದಿದೆ.
ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಶಿವಕುಮಾರ್ (34) ಮೃತ ಯುವಕ.
ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವವರು ಕೃತ್ಯ
ಎಸಗಿದ್ದು ನಾಪತ್ತೆಯಾಗಿದ್ದಾರೆ.
ಈ ಇಬ್ಬರು ಮಾಡಿರುವ ಕಳ್ಳತನದ ಬಗ್ಗೆ ಶಿವಕುಮಾರ್ ಗೆ ತಿಳಿದಿತ್ತು. ಆ ವಿಚಾರ ಬಾಯ್ಬಿಡುತ್ತಾನೆ ಎಂದು
ಹೈದರಾಬಾದ್ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್ ನನ್ನು ಕರೆಸಿಕೊಂಡಿದ್ದರು.
ಕಳೆದ ಶುಕ್ರವಾರ ಜೊತೆಗೆ ಕರೆದೊಯ್ದು ಕಂಠಪೂರ್ತಿ ಕುಡಿಸಿ ಹಲ್ಲೆ ನಡೆಸಿದ್ದರು.
ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ನಂತರ ಶಿರಾಡಿಘಾಟ್ ನ ಗುಂಡ್ಯದ ಬಳಿ ಶವ ಬಿಸಾಡಿದ್ದರು. ಈ ವೇಳೆ ಹಂತಕರಿಂದ ತಪ್ಪಿಸಿಕೊಂಡು ಬಂದಿದ್ದ
ದಿಲೀಪ್ ಎಂಬಾತ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದ ಸತ್ಯ ತಿಳಿದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments