ಹಾಸನ: ತಾಲ್ಲೂಕಿನ ಉಗನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಗದವಳ್ಳಿಯ ನಿವಾಸಿಗಳಿಗೆ ಶಾಸಕ ಹೆಚ್.ಪಿ.ಸ್ವರೂಪ್ ಅವರು ಸಾಗುವಳಿ ಪತ್ರ ವಿತರಿಸಿದರು.
ಸಾಗುವಳಿ ಚೀಟಿ ಇಲ್ಲದೆ 15 ಜನರು ತೊಂದರೆ ಅನುಭವಿಸುತ್ತಿದ್ದರು.
ಈ ಬಗ್ಗೆ ಮನವಿ ಆಲಿಸಿದ್ದ ಶಾಸಕ ಸ್ವರೂಪ್ ಅವರು, ಸಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ವಿತರಿಸಿದರು. ಸ್ಥಳೀಯ ಮುಖಂಡರು, ಗ್ರಾಮಸ್ಥರು, ಅಧಿಕಾರಿಗಳು ಹಾಜರಿದ್ದರು.
0 Comments